ಇಂದಿನಿಂದ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ಯಕ್ಷೋತ್ಸವ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಫೆಬ್ರವರಿ 23 , 2014
|
ಫ಼ೆಬ್ರವರಿ 23, 2014
|
ಇಂದಿನಿಂದ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ಯಕ್ಷೋತ್ಸವ
ಮಂಗಳೂರು :
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಫೆ.23 ಮತ್ತು ಫೆ.24ರಂದು ಅಂತರ್ಕಾಲೇಜು ಯಕ್ಷಗಾನ ಸ್ಪರ್ಧೆ 'ಯಕ್ಷೋತ್ಸವ 2013-14' ನಡೆಯಲಿದೆ.
ಫೆ.23ರಂದು ಬೆಳಗ್ಗೆ 9.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಯಕ್ಷೋತ್ಸವವನ್ನು ಉದ್ಘಾಟಿಸುವರು. ಬೆಳಗ್ಗೆ 10.15ರಿಂದ ಸುರತ್ಕಲ್ ಗೋವಿಂದ ದಾಸ ಕಾಲೇಜು ವಿದ್ಯಾರ್ಥಿಗಳಿಂದ 'ಸುದರ್ಶನ ವಿಜಯ', ಉಜಿರೆ ಎಸ್ಡಿಎಂ ಕಾಲೇಜು ತಂಡದಿಂದ 'ವಿದ್ಯುನ್ಮತಿ ಕಲ್ಯಾಣ', ಬೆಟ್ಟಂಪಾಡಿ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಂದ 'ನರಕಾಸುರ ಮೋಕ್ಷ', ಎಸ್ಡಿಎಂ ಉದ್ಯಮಾಡಳಿತ ವಿದ್ಯಾರ್ಥಿಗಳಿಂದ'ಜಾಂಬವತಿ ಕಲ್ಯಾಣ', ಕೆನರಾ ಕಾಲೇಜು ತಂಡದಿಂದ 'ಸುಧನ್ವಾರ್ಜುನ' ಯಕ್ಷಗಾನ ಪ್ರದರ್ಶನ ಜರುಗಲಿವೆ.
ಫೆ.24ರಂದು ಬೆಳಗ್ಗೆ 10ರಿಂದ ಶ್ರೀ ನಾರಾಯಣ ಗುರು ಕಾಲೇಜು ವಿದ್ಯಾರ್ಥಿಗಳಿಂದ 'ದಕ್ಷಾಧ್ವರ' , ಪುಂಜಾಲ್ಕಟ್ಟೆ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಂದ 'ನರಕಾಸುರ ಮೋಕ್ಷ ', ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ 'ಪಾರ್ಥ ದರ್ಶನ', ಆಳ್ವಾಸ್ ಮೂಡಬಿದ್ರೆ ಇವರಿಂದ 'ಮೋಹಿನಿ ಮೋಹ' ಆಖ್ಯಾನಗಳು ಪ್ರದರ್ಶಿತಗೊಳ್ಳಲಿವೆ. ಬಳಿಕ ಆತಿಥೇಯ ಎಸ್ಡಿಎಂ ವಿದ್ಯಾರ್ಥಿಗಳಿಂದ 'ಮಹಿಷ ರ್ಮನಿ' ಯಕ್ಷಗಾನ ಪ್ರದರ್ಶನವಿದೆ. ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಜರುಗಲಿದೆ.
ಕೃಪೆ :
http://www.vijaykarnataka.com
|
|
|